ಶಾಲಾ ವಜ್ರಮಹೋತ್ಸವ

ಭಾಗ - 1

ಇದು ನಮ್ಮದೊಂದು ಕನಸು . ಕನಸಿನ ಕೂಸು. ಈ ಕೂಸಿನ ತೊದಲು ನುಡಿ.  ನುಡಿಯೊಳಗೆ ಶೃತಿ ಕದಲಿರಬಹುದು. ಈ ಅಳುಕಿನಲ್ಲೇ ಪುಳಕಗೊಂಡು ವಜ್ರಮಹೋತ್ಸವಕ್ಕೆ ಮುಂದಾದೆವು. ಸತತ ತಿಂಗಳು ಶ್ರಮಿಸಿದೆವು. ನನ್ನ ಜೊತೆ ನಮ್ಮ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರ ನಾಗರಾಜೇಗೌಡ, ಕುಮಾರ್, ಜಯಸ್ವಾಮಿ, ಶಿವಣ್ಣ ಅನ್ವರ್ ಪಾಷಾ ರವರು, ತಾರಾದೇವಿ, ಅಂಬಿಕಾ ಸೇರಿದಂತೆ ಎಲ್ಲರೂ ಸಹಕರಿಸಿದರು. ಇನ್ನು ನಮ್ಮ ಶಾಲೆಯ ಶಿಕ್ಷಕ ಸಮೂಹ ಯೋಗೀಶ್, ಮಹದೇವಯ್ಯ, ಧರ್ಮಪಾಲ್,ಮಹೇಶ್, ಶಾರದಾ, ಅಶ್ವಿನಿ, ಗೌರವಶಿಕ್ಷಕರಾದ ಜವರಯ್ಯ, ರೇವಣ್ಣ, ಎಲ್ಲದ್ದಕ್ಕಿಂತ ಸಂಗೀತ ಶಿಕ್ಷಕ ಮೇರ್ವಾಡೆ ಎಲ್ಲರೂ ಅವಿರತ ಶ್ರಮಿಸಿದರು. ಕೈಗೂಡಿತು ಕನಸು. ಇದುವೇ ನಮ್ಮ ಶಾಲೆಯ ವಜ್ರಮಹೋತ್ಸವ.

ಮೊದಲ ಮಾತು ಉಪಪ್ರಾಂಶುಪಾಲರಾದ ಪ್ರಶಾಂತ್ ಎಂ.ಸಿ ರಿಂದ
 
 
1953-2013

ಆಗಮಿಸಿದ್ದ ಗಣ್ಯರು :,
ಶ್ರೀ ಕೆ.ಜೆ.ಸುರೇಶ್ ರವರು ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಲಯ, ಆರ್.ಪಿ.ಜಗದೀಶ್ , ಹಿರಿಯ ಪತ್ರಕರ್ತರು, ಆರ್.ಡಿ.ಸತೀಶ್, ಬೆಂಗಳೂರಿನ ವಿಜಯ ಕಾಲೇಜಿನ ಗಣಿತ ಪ್ರಾಧ್ಯಪಕರು, ಶ್ರೀ ಎಚ್.ವಿಶ್ವನಾಥ್ ರವರು, ಸಂಸದರು, ಮೈಸೂರು ಲೋಕಸಭಾ ಕ್ಷೇತ್ರ, ಆರ್.ಎಸ್.ವಿಶ್ವನಾಥ್, ಕೈಗಾರಿಕೋದ್ಯಮಿಗಳು ಮೈಸೂರು, ಶ್ರೀ ರಾಮಲಿಂಗುರವರು ಕ್ಷೇತ್ರಶಿಕ್ಷಣಾಧಿಕಾರಿಗಳು ಪಿರಿಯಪಟ್ಟಣ, ಶ್ರೀಹುಚ್ಚೇಗೌಡರು ನಿವೃತ್ತಶಿಕ್ಷಕರು, ಜನಪ್ರತಿನಿಧಿಗಳು, ಊರಿನ ಗಣ್ಯರು, ಎಲ್ಲ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು

ಜ್ಯೋತಿ ಬೆಳಗಿಸಿದ ಹಳೆ ವಿದ್ಯಾರ್ಥಿಗಳು
ಕೈಗೂಡಿದ ಕಾರ್ಯಕ್ರಮಗಳು:
1. ಶಾಲಾ ವಜ್ರಮಹೋತ್ಸವ
2. ಹಳೆ ವಿದ್ಯಾರ್ಥಿಗಳಿಂದ ಸವಿ ನೆನಪು ಮೆಲುಕು
3. ಶಾಲಾ ಸ್ಮರಣ ಸಂಚಿಕೆ ಬಿಡುಗಡೆ
4. ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ
5. ಹಳೆ ವಿದ್ಯಾರ್ಥಿಗಳಿಂದ ಗುರುವಿಗೆ ಸನ್ಮಾನ
6. ವಾರ್ಷಿಕೋತ್ಸವ
7. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
8. ಸವಿ ಸವಿ ನೆನಪಿನಲ್ಲಿ ಶಾಲೆಯ ತಾರೆಗಳು


ಶ್ರೀ ಕೆ.ಜೆ.ಸುರೇಶ್ ರವರಿಗೆ ಗುರುಗಳಾದ ಹುಚ್ಚೇಗೌಡರಿಂದ ಸನ್ಮಾನ
 
 ---ಮುಂದುವರಿಯುತ್ತದೆ..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು