ಪ್ರಕೃತಿಯೇ ನಿಜವಾದ ದೈವ. ಅದಿಲ್ಲದೇ ಈ ಜಗತ್ತಿಲ್ಲ. ಪ್ರಕೃತಿಯೇ ನಮ್ಮ ನಿಮ್ಮೆಲ್ಲರ ಆರಾಧ್ಯ. ಹಾಗಾಗಿ ಇಂದಿನ ತುರ್ತು ಇದೇ ಆಗಿದೆ. ಈ ಪರಿಸರಕ್ಕೆ ಒಂದು ದಿನ ಎಂದರೆ ಅದು ಸಂಕುಚಿತ , ಸೀಮಿತ. ಪರಿಸರದ ಕಾಳಜಿ ನಿತ್ಯ ಆಗಬೇಕು. ಅದು ನಮ್ಮ ಅಕ್ಷರ ಜ್ಞಾನದ ಜೊತೆ ಮೇಳೈಸಬೇಕು. ಈ ಅರಿವು ಮಕ್ಕಳಲ್ಲಿ ಮೂಡಿಸುವ ಕಾಯಕ ನಿತ್ಯ ತರಗತಿಯೊಳಗೆ ನಡೆಯುತ್ತಿರುತ್ತದೆ. ಆದರೆ, ಅದಕ್ಕೊಂದು ದಿನ ಹಬ್ಬ ಮಾಡಿದೆವು. ಅದುವೇ
ಪರಿಸರ ದಿನ-2013.
 |
ಉಪಪ್ರಾಂಶುಪಾಲ ಪ್ರಶಾಂತ್ ಮತ್ತು ಸಹಶಿಕ್ಷಕರಾದ ಶಾರದ ಸಿಲ್ವರ್ ಸಸಿ ನೆಡುತ್ತಿರುವುದು |
 |
ಸಹಶಿಕ್ಷಕರಾದ ಯೋಗೀಶ್ ರವರು ತೇಗದ ಗಿಡ ನೆಟ್ಟರು |
 |
ಎಸ್.ಡಿ.ಎಂ.ಸಿ ಸದಸ್ಯರಾದ ಕುಮಾರ್, ಸಹಶಿಕ್ಷರಾದ ಮಹೇಶ್, ಧರ್ಮಪಾಲ್ ರಿಂದ ನೀರೆರೆದರು |
 |
ಎಸ್.ಡಿ.ಎಂ.ಸಿ ಸದಸ್ಯರಾದ ಅನ್ವರ್ ಪಾಷಾ, ಜಯಸ್ವಾಮಿ ಅವರೂ ಸಿಲ್ವರ್ ಗಿಡ ನೆಟ್ಟರು |
 |
ಪಿಟಿ ಮೇಷ್ಟ್ರಾದ ಮಹೇಶ್ ರವರು ಗಿಡ ನೆಟ್ಟು ಪೋಸ್ ಕೊಟ್ಟಿದ್ದು.. |
|
|
|
ಪ್ರತಿ ವರ್ಷದಂತೆ ಈ ವರ್ಷವೂ ಗಿಡ ನೆಟ್ಟಿದ್ದೇವೆ. ಇದು ಬೆಳೆದು ಹೆಮ್ಮರವಾಗಲಿ ಎಂಬುದು ನಮ್ಮ ಬಯಕೆ. ಅದಕ್ಕಾಗಿಯೇ ನಿತ್ಯ ಮಂತ್ರಿ ಮಂಡಲ ಜೊತೆಗೂಡಿ ಹಾರೈಕೆ ಮಾಡುತ್ತೇವೆ. ಆದರೆ, ಈ ಗಿಡಗಳನ್ನೂ ಮಂಗಮಾಯ ಮಾಡುವ ಕೈಗಳಿಗೆ ಕೈಮುಗಿದು ಬೇಡುತ್ತೆವೆ : " ಗಿಡ ಕೀಳಬೇಡಿ. ಭವಿಷ್ಯದ ಬೆಳಕು ಆರಿಸಬೇಡಿ" ಎಂದು. ಇದಕ್ಕಾಗಿಯೇ ನೆರೆ ಹೊರೆಯ ಕಾಲೋನಿಗಳಿಗೆ ಜಾಥಾ ಹೋಗಿಯೂ ಬಂದ್ದಿದ್ದೇವೆ. ಗಿಡ ಮರ ಉಳಿಸಿ. ಬೆಳೆಸಿ. " ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ"
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ